ಅಂತರೀಕ್ಷಲ್ಲೊಂದು ನಗರ

ಅಂತರೀಕ್ಷಲ್ಲೊಂದು ನಗರ

ನೆಲದಾಳದಲ್ಲಿ, ಸಾಗರದಾಳದಲ್ಲಿ ನಗರಗಳನ್ನು ನಿರ್ಮಿಸಿ ಯಾವ ಸಮೆಸ್ಯೆಗಳೂ ಇಲ್ಲದಂತೆ ಬದುಕುವ ವ್ಯವಸ್ಥೆಯನ್ನು ಅಮೇರಿಕ, ಜಪಾನಗಳಂತಹ ಮುಂದುವರೆದ ರಾಷ್ಟ್ರಗಳು ಮಾಡುತ್ತಲಿವೆ. ಜನಸಾಂದ್ರತೆ ಪರಿಸರ ನೈರ್ಮಲ್ಯತೆಗಳನ್ನು ಈ ಪ್ರದೇಶಗಳಲ್ಲಿ ಕಾಪಾಡಿ ಕೊಳ್ಳುಬಹುದೆಂಬ ಆಶಯ ಇವರದು. ಇದೀಗ ಅಂತರೀಕ್ಷದಲ್ಲಿ ನಿಸರ್ಗ ಸಹಜವಾದ ವಾತಾನುಕೂಲ ವ್ಯವಸ್ಥೆ ಹೊಂದಿ ನಗರಗಳನ್ನು ನಿರ್ಮಾಣಗೊಳಿಸಲಾಗುತ್ತಿದೆ. ಈ ನಗರದ ಸುತ್ತಲೂ ಗಾಜಿನಗೊಳವನ್ನು ಮಾಡಲಾಗಿದ್ದು ಸೂರ್ಯನ ಚಲನೆಯನ್ನು ಅನುಸರಿಸಿ ಬೆಳಕನ್ನು ಪ್ರತಿಫಲಿಸುವ ಕನ್ನಡಿಗಳು ಪ್ರಾಕೃತಿಕ ಬೆಳಕನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುತ್ತವೆ. ಎರಡು ಗಾಜಿನ ಪದರುಗಳಿಂದಾವೃತ್ತವಾದ ಈ ನಗರ ಸಂಕೀರ್ಣದಲ್ಲಿ ಹೊರಪದರವು ಪರಿಸರದ ಮಾಲಿನ್ಯ, ಶಬ್ಧ ಮಾಲಿನ್ಯವನ್ನು ತಡೆಯುತ್ತದೆ. ಒಳಪದರ ಗಾಜಿನ ಪದರವನ್ನು ಗಾಳಿ ಒಳಬರಲು ಅನುಕೂಲಕ್ಕೆ ತೆರೆಯುವ ಕಿಟಕಿಯಂತೆ ಬಳಸಬಹುದು. ಸೂರ್ಯನ ತಾಪ, ಗಾಳಿಯ ಚಲನೆಯನ್ನು ಈ ನಗರದಲ್ಲಿ ಕಾಯ್ದುಕೊಳುತ್ತದೆ. ಹೆಚ್ಚು ಬಿಸಿಗಾಳಿಯನ್ನು ನಗರದ ಮೇಲಿನ ಮುಚ್ಚಳದಿಂದ ಹೊರಹಾಕಲು ಸಾಧ್ಯವಿದೆ. ಚಳಿಗಾಲದಲ್ಲಿ ಗಾಳಿಯ ಉಷ್ಣತೆಯನ್ನು ಬಳಸಿ ನಗರವನ್ನು ಬೆಚ್ಚಗಿಡಬಹುದು.

ನೆಲಮಟ್ಟದಲ್ಲಿ ಸಾಂದ್ರವಾಗಿರುವ ಹೊರ ಪ್ರಪಂಚದೊಳಗೆ ಸೇರದಂತಿರಲು ಗಾಳಿಯನ್ನು ೧೭ ಮೀ ನೆಲಮಟ್ಟದ ಎತ್ತರದಿಂದ ಒಳಸೇರಿಕೊಳ್ಳುವ ವ್ಯವಸ್ಥೆ ಇದೆ. ಟೊಳ್ಳಾದ ಪೆಟ್ಟಿಗೆಯಾಕಾರದ ನೆಲವನ್ನು ಮಾಡಲಾಗಿದ್ದು ತೂಗು ಸೇತುವೆಯಂತೆ ನೆಲವನ್ನು ತೂಗುಹಾಕಲಾಗಿದೆ. ನಿರ್ದಿಷ್ಟವಾದ ಆಕಾರವನ್ನು ಹೊಂದಿರುವ ಈ ನಗರವಿನ್ಯಾಸ ಗಾಳಿಗೆ ತಡೆಯೊಡ್ಡದಂತೆ ರೂಪುಗೊಂಡಿದೆ. ವೇಗದ ಗಾಳಿಯನ್ನು ತಡೆದು ನೆಲದಲ್ಲಿ ಮಂದವಾಗಿ ಹರಡುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಕಟ್ಟಡದ ಹೊರಭಾಗದಲ್ಲಿನ ಉದ್ಯಾನದಲ್ಲಿ ಈಗಾಗಲೇ ಒಳ್ಳೆಯ ಸೂಕ್ತ ಸಸ್ಯ ಸಂಕುಲದ ಬೆಳವಣಿಗೆಯನ್ನು ಸಹ ಮಾಡಲಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತಿನ್ನಾರಿಗೆಷ್ಟು ಕಷ್ಟವೋ ?
Next post ಏನೇ ಬಂದರೂ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys